ನಳೀನ್ ಕುಮಾರ್ ಕಟೀಲ್ ಪ್ರಬುದ್ದ ರಾಜಕಾರಣಿಯಲ್ಲ: ಸಿದ್ದರಾಮಯ್ಯ
1 min read
ಬೆಂಗಳೂರು,ಅ.21- ನಳೀನ್ ಕುಮಾರ್ ಕಟೀಲ್ ಪ್ರಬುದ್ದ ರಾಜಕಾರಣಿಯಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟೀಲ್ ಜೋಕರ್ ಮಟ್ಟದವರು. ಅವರಿಗೆ ತಲೆ ಕೆಟ್ಟಿದೆ ಎಂದು ಕಾಣುತ್ತದೆ ಎಂದಿದ್ದಾರೆ.
ಕಾಂಗ್ರೆಸ್ ಪರವಾದ ಅಲೆ ಹಾನಗಲ್, ಸಿಂಧಗಿ ಕ್ಷೇತ್ರದಲ್ಲಿದೆ. ಯಾವುದೇ ಉಪ ಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರಲ್ಲ. ಆದರೆ ಜನರ ಆಕ್ರೋಶ ಏನು ಎನ್ನುವುದು ಗೊತ್ತಾಗತ್ತೆ. ಉಪ ಚುನಾವಣೆಯಲ್ಲಿ ಜೆಡಿಎಸ್ ಗೆ ಗೆಲುವು ಸುಲಭವಲ್ಲ. ಆದರೆ, ಎರಡೂ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿವೆ. ಸಿಎಂ ಇಬ್ರಾಹಿಂ ಒಬ್ಬ ವಿಧಾನ ಪರಿಷತ್ ಸದಸ್ಯರು. ಅವರ ಬಗ್ಗೆ ಮಾತನಾಡೋದಿಲ್ಲ ಎಂದು ಹೇಳಿದರು.
ಅಕ್ಟೋಬರ್ ಒಳಗೆ ಮೀಸಲಾತಿ ವರದಿ ಪಡೆಯಬೇಕು. ಇಲ್ಲವಾದರೆ ಪಾಠ ಕಲಿಸ್ತೇವೆಂಬ ಜಯ ಮೃತ್ಯುಂಜಯ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿ ಪಂಚಮಸಾಲಿ ಸಮುದಾಯದವರಿಗೆ ಮೀಸಲಾತಿ ನೀಡುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದ ತಕ್ಷಣ ಮೀಸಲಾತಿ ಸೌಲಭ್ಯ ಒದಗಿಸುವುದಾಗಿ ನಾಯಕರು ಹೇಳಿದ್ದರು. ವಾಲ್ಮೀಕಿ ಸಮುದಾಯಕ್ಕೂ ಬಿಜೆಪಿ ಆಶ್ವಾಸನೆ ಕೊಟ್ಟಿದೆ. ಅದೆಲ್ಲವನ್ನೂ ಈಗ ಸರ್ಕಾರ ಈಡೇರಿಸಬೇಕು. ಇಲ್ಲದಿದ್ದರೆ ಪಂಚಮಸಾಲಿ ಸಮಯದಾಯ ಬಿಜೆಪಿಗೆ ಪಾಠ ಕಲಿಸಲಿ ಎಂದರು.
ರಮೇಶ್ ಕುಮಾರ್ ನ ಜೈಲಿಗೆ ಕಳಿಸುವೆ ಎನ್ನುವ ಸುಧಾಕರ್ ಹೇಳಿಕೆ ವಿಚಾರ. ದುಡ್ಡಿನ ಮದ ಅವರಿಗೆ. ಅವರು ಕಾಂಗ್ರೆಸ್ ನಿಂದ ಗೆದ್ದು ಬಿಜೆಪಿಗೆ ಹೋದವರು. ಇಂಥ ದುರಹಂಕಾರದ ಮಾತುಗಳಿಗೆ ಜನ ಬುದ್ದಿ ಕಲಿಸ್ತಾರೆ. ಅಧಿಕಾರ ಶಾಶ್ವತ ಅಂತ ತಿಳಿದುಕೊಂಡಿದ್ದಾರೆ. 2023ಕ್ಕೆ ಮನೆಗೆ ಹೋಗ್ತಾರೆ. ಆಗ ಯಾರನ್ನ ಯಾರು ಜೈಲಿಗೆ ಕಳಿಸ್ತಾರೆ ಗೊತ್ತಾಗುತ್ತೆ. ಅಪರಾಧ ಮಾಡಿದ್ರೆ ಮಾತ್ರ ಜೈಲಿಗೆ ಹಾಕಬಹುದು ಎಂದಿದ್ದಾರೆ.
ಆರ್ ಎಸ್ಎಸ್ ನ್ನು ನಾನು ಟೀಕಿಸುವುದು ಅವರ ನಡವಳಿಕೆಗೆ. ಪೊಲೀಸರು ಹೋಗಿ ಕೇಸರಿ ಶಾಲು ಹಾಕಿಕೊಂಡರು. ಪೊಲೀಸರಿಗೆ ಸಮವಸ್ತ್ರ ಇರುವುದೇಕೆ? ಪೊಲಿಸರು ಕೇಸರಿ ಶಾಲು ಹಾಕಿಕೊಂಡಿದ್ದು ಪೂರ್ವ ನಿಯೋಜಿತ. ಎಲ್ಲರೂ ಒಂದೇ ಅಂಗಡಿಯಲ್ಲಿ ಖರೀದಿ ಮಾಡಿದ್ದರೇ ? ಇವರು ಕೊಟ್ಟಿದ್ದಾರೆ, ಅವರು ಹಾಕಿಕೊಂಡಿದ್ದಾರೆ. ಕೇಸರಿ ಕಂಡರೆ ಆರ್ ಎಸ್ಎಸ್ ಕಂಡರೆ ನನಗೆ ಭಯ ಇಲ್ಲ. ಆದರೆ ಶಾಂತಿ ಕದಡಿ ಸಮಾಜ ಒಡೆಯುತ್ತಾರೆ ಎನ್ನುವ ಭಯ ನನಗೆ ಅಷ್ಟೇ. ಸಮಾಜದ ಬಗ್ಗೆ ಕಾಳಜಿ ಅಷ್ಟೇ ಎಂದರು.
ಕರ್ನಾಟಕದ ಬಿಜೆಪಿಗೆ ಧಂ ಇಲ್ಲ. ಅನುದಾನವನ್ನು ನಾವು ದೆಹಲಿಗೆ ಹೋಗಿ ಭಿಕ್ಷುಕರ ತರಹ ಕೇಳಬೇಕಾ? ಧಂ ಇದ್ದಿದ್ರೆ ಪ್ರಧಾನಿ ಕಚೇರಿ ಮುಂದೆ 25 ಸಂಸದರು ಹೋಗಿ ನಿಂತು ಅನುದಾನ ವಸೂಲಿ ಮಾಡಬೇಕಿತ್ತು. ಜನರು ಸರ್ಕಾರದ ವಿರುದ್ಧ ತಿರುಗಿ ಬೀಳದೇ ಹೋದರೆ ಹೀಗೆಯೇ ಆಗೋದು. ಬೆಲೆ ಏರಿಕೆಯನ್ನು ಜನ ಸಹಿಸಿಕೊಂಡಿದ್ದರೆ ಅವರು ಏನು ತಿಳಿದುಕೊಳ್ತಾರೆ? ಜನ ಇವತ್ತು ಬಹಳ ಕಷ್ಟದಲ್ಲಿ ಇದ್ದಾರೆ. ಬೆಲೆ ಏರಿಕೆ ಕೂಡ ಉಪ ಚುನಾವಣೆಯಲ್ಲಿ ಒಂದು ಅಂಶ. ಭ್ರಷ್ಟಾಚಾರ, ಅಭಿವೃದ್ಧಿ ಕೆಲಸ ಆಗದೇ ಇರುವುದು ಇವೆಲ್ಲವೂ ಪ್ರಚಾರದ ಅಂಶಗಳೇ. ಜನ ಸರ್ಕಾರದ ವಿರುದ್ಧ ತಿರುಗಿಬೀಳಬೇಕು. ಎಲ್ಲವನ್ನ ಸಹಿಸಿಕೊಂಡ್ರೆ ಹೇಗೆ. ಅದನ್ನ ಅವರು ಎನ್ ಕ್ಯಾಶ್ ಮಾಡಿಕೊಳ್ತಾರೆ. ಜನ ಇವತ್ತು ಕಷ್ಟದಲ್ಲಿದ್ದಾರೆ. ಹೀಗಾಗಿ ಜನರೇ ಇದರ ಬಗ್ಗೆ ಧ್ವನಿ ಎತ್ತಬೇಕು ಎಂದು ಹೇಳಿದರು.
ಜೆಡಿಎಸ್ ಏನೇ ಮಾಡಿದರೂ ಕೂಡ ಕೊನೆಗೆ ಬಿಜೆಪಿ ಜೊತೆ ಸೇರಿಕೊಳ್ಳುತ್ತಾರೆ. ಜೆಡಿಎಸ್ ನವರಿಗೆ ಯಾವುದೇ ಸಿದ್ದಾಂತವಿಲ್ಲ. ಅಲ್ಪ ಸಂಖ್ಯಾತರು ಬುದ್ದಿವಂತರಿದ್ದಾರೆ ಈಗಲೂ ಜೆಡಿಎಸ್, ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಬಿಜೆಪಿ ಜೊತೆ ಸೇರಿಕೊಂಡು ಸರ್ಕಾರ ಮಾಡಿದ ಮೇಲೂ ಸೆಕ್ಯುಲರ್ ಆಗ್ತಾರಾ ಜೆಡಿಎಸ್ ನವರು? ಅವರಿಗೆ ಅಲ್ಪ ಸಂಖ್ಯಾತರು ಏಕೆ ಮತ ನೀಡುತ್ತಾರೆ. ಜೆಡಿಎಸ್ ಸೆಕ್ಯುಲರ್ ಪಾರ್ಟಿ ಅಲ್ಲ.ಇಷ್ಟು ಮಾತ್ರ ಹೇಳ್ತಿನಿ. ಪ್ರಾದೇಶಿಕ ಪಕ್ಷ ನಿಜ. ಆದ್ರೆ ಜಾತ್ಯಾತೀತ ಪಕ್ಷ ಅಲ್ಲ. ನಡವಳಿಕೆಯಲ್ಲಿ ಜಾತ್ಯಾತೀತ ಅಲ್ಲ, ಕೋಮುವಾದಿ. ಆಚಾರದಲ್ಲಿ ಜೆಡಿಎಸ್ ಕೋಮುವಾದಿ ಪಕ್ಷ ಎಂದು ಲೇವಡಿ ಮಾಡಿದರು.
ಸಲೀಂ, ಉಗ್ರಪ್ಪ ಅವರ ಮಾತು ಬಿಡಿ. ಯತ್ನಾಳ್ ಸರ್ಕಾರದ ಬಗ್ಗೆಯೇ ಮಾತನಾಡಿದ್ರು. ಅವರ ಮಾತು ಸರ್ಕಾರದ ಮೇಲೆ, ಆಡಳಿತದ ಮೇಲೆ ಪರಿಣಾಮ ಬೀರಲ್ವಾ? ಉಗ್ರಪ್ಪ ಮಾತನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ಸಲೀಂ, ಉಗ್ರಪ್ಪ ಮಾತನ್ನು ನಾನು ಕೇಳಿಲ್ಲ. ಬಸವರಾಜ ಬೊಮ್ಮಾಯಿ ಅವರು ಮೊದಳು ಯತ್ನಾಳ್ ಹೇಳಿಕೆ ಬಗ್ಗೆ ಉತ್ತರ ಕೊಡಲಿ. ಹಿಂದೆ ಅನಂತ್ ಕುಮಾರ್, ಯಡಿಯೂರಪ್ಪ ಮಾತಾಡಿದ್ರಲ್ಲ ಅದಕ್ಕೆ ಉತ್ತರ ಕೊಡಲಿ. ಬಿಜೆಪಿಯವರು ಹೇಡಿಗಳ ತರಹ ವರ್ತಿಸುತ್ತಾರೆ. ನನಗೆ ಗೊತ್ತಿರುವ ಮಟ್ಟಿಗೆ ಬಿಜೆಪಿಯವರು ಎರಡೂ ಕ್ಷೇತ್ರದಲ್ಲಿ ಹಣ ಹೊಳೆ ಹರಿಸ್ತಿದ್ದಾರೆ ಚುನಾವಣೆಯಲ್ಲಿ. ಒಂದು ಓಟಿಗೆ 2000 ಕೊಡ್ತಿದ್ದಾರೆ ಅಂತ ಸುದ್ದಿ ಇದೆ. ಏನು ಕೆಲಸ ಮಾಡಿದಾರೆ ಅಂತ ಬಿಜೆಪಿಯವರು ಜನರ ಮುಂದೆ ನಿಂತು ಮತ ಕೇಳ್ತಾರೆ? ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬಡವರಿಗೆ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ. ಜನ ಯಾಕೆ ಓಟು ಹಾಕ್ತಾರೆ ಇವರಿಗೆ? ಎಂದು ಪ್ರಶ್ನಿಸಿದರು.