ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ ಡಿಬಾಸ್ ದರ್ಶನ್
ಮೈಸೂರು: ಲಾಕ್ಡೌನ್ ಹಿನ್ನೆಲೆ ತವರಿನಲ್ಲಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದರು.
ಜನತಾ ಕರ್ಪ್ಯೂ ಸಮಯದಿಂದಲೂ ಮೈಸೂರಿನಲ್ಲೆ ಇರುವ ನಟ ದರ್ಶನ್ ಸಮಯ ಕಳೆಯಲು ಗಣಪತಿ ಸಚ್ಚದಾನಂದ ಆಶ್ರಮಕ್ಕೆ ಭೇಟಿ ನೀಡಿದ್ದರು. ಆಶ್ರಮದಲ್ಲಿನ ಶುಕವನಕ್ಕೆ ಭೇಟಿ ನೀಡಿ ಗಣಪತಿ ಸಚ್ಚಿದಾನಂದ ಶ್ರೀಗಳ ಜೊತೆ ಕುಶಾಲೋಪರಿ ಮಾತುಕತೆ ನಡೆಸಿದರು. ಈ ವೇಳೆ ದರ್ಶನ್ ಅವರು ಆಶ್ರಮದಲ್ಲಿನ ಗಿಳಿಗಳನ್ನ ಹಾರೈಕೆ ಮಾಡಿದರು.