ಇಂದು 2ನೇ ದಿನದ ಲಾಕ್ ಡೌನ್: ತರಕಾರಿ ಖರೀದಿಗೆ ಬಂದವರಿಗೆ ಕೊರೊನಾ ಜಾಗೃತಿ
ಮೈಸೂರು: ಇಂದು ಜನತಾ ಕರ್ಫ್ಯೂ ಎರಡನೇ ದಿನ ಲಾಕ್ ಡೌನ್ ಹಿನ್ನಲೆ. ಇಂದು ಕೂಡ ಆಗತ್ಯ ವಸ್ತುಗಳ ಖರೀದಿಗೆ ಬೆಳ್ಳಗ್ಗೆ 6 ರಿಂದ 10 ವರಗೆ ಅವಕಾಶ ಮಾಡಿಕೊಡಲಾಗಿತ್ತು.
ಮೈಸೂರಿನ ಎಂಜಿ ರಸ್ತೆಯ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಬಂದ ಸಾರ್ವಜನಿಕರಿಗೆ ಕೊರೊನಾ ಜಾಗೃತಿ ಮುಡಿಸಲಾಗಿದೆ. ಕರ್ನಾಟಕ ಮುಕ್ತ ರಾಜ್ಯ ವಿಶ್ವವಿದ್ಯಾನಿಲಯದ ಕುಲಪತಿ(KSOU) ಕುಲಪತಿ ವಿದ್ಯಾಶಂಕರ್ ಅವರಿಂದ ಜಾಗೃತಿ.
ಕಾರೊನಾ ಹೆಚ್ಚಾದ ಹಿನ್ನಲೆಯಲ್ಲಿ ಜಾಗೃತಿ ಮುಂದಾಗಿರುವ ಕುಲಪತಿ ಡಾ.ವಿದ್ಯಾಶಂಕರ್ ತಮ್ಮ ಸಿಬ್ಬಂದಿಗಳು ಹಾಗೂ ಆಡಳಿತ ವರ್ಗದ ಜೊತೆ ಜಾಗೃತಿ ಮೂಡಿಸಿದ್ದಾರೆ. ಈ ವೇಳೆ ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆ.